ಡಾ. ಆರತಿ ವೆಂಕಟೇಶ್ ಇವರು ವೃತ್ತಿಯಲ್ಲಿ ವೈದ್ಯರು. ೨೫ಕ್ಕೂ ಹೆಚ್ಚು ಕಾದಂಬರಿಗಳನ್ನು ಹಾಗು ಹಲವು ನೀಳ್ಗತೆಗಳನ್ನು ರಚಿಸಿದ್ದಾರೆ. ಇವರ ೧೫ ಕಾದಂಬರಿಗಳು ಕನ್ನಡದ ವಿವಿಧ ಜನಪ್ರಿಯ ನಿಯತಕಾಲಿಕಗಳಲ್ಲಿ ಪ್ರಕಟವಾಗಿವೆ.ಇದಲ್ಲದೆ ಕಿರುತೆರೆಯ ಜನಪ್ರಿಯ ಧಾರಾವಾಹಿ "ಮುಕ್ತಾ" ಇದರ ಮೊದಲ ೧೫೦ ಕಂತುಗಳ ಸಂಭಾಷಣೆ ಇವರ ಕೊಡುಗೆ. "ಮಳೆಬಿಲ್ಲು" ಧಾರಾವಾಹಿಯ ಕಥಾವಿಸ್ತರಣೆ ಹಾಗು ಸಂಭಾಷಣಾ ರಚನೆಯನ್ನು ಪೂರೈಸಿದ್ದಾರೆ. ಆಕಾಶವಾಣಿಯ 'ವನಿತಾ ವಿಹಾರ' ಕಾರ್ಯಕ್ರಮದಲ್ಲಿ ಇವರ ಕಥೆಗಳು ನಾಟಕರೂಪದಲ್ಲಿ ಪ್ರಸಾರಗೊಂಡಿವೆ. == ಕೃತಿಗಳು == === ಕಾದಂಬರಿ === ಕಾರ್ಮುಗಿಲ ತಾರೆ ಸಮಾನಾಂತರ ರೇಖೆಗಳು ವಿದಾಯ ಬೆಡ್ ನಂ.೬ ರಾಶಿ ಆಶಾಕಿರಣ === ವೈದ್ಯಕೀಯ === ಸೌಂದರ್ಯ ಸಮಸ್ಯೆಗಳು ಡಾ. ಆರತಿ ವೆಂಕಟೇಶ್ ಇವರ ತಾಯಿ ಸುಪ್ರಸಿದ್ಧ ಲೇಖಕಿ ಉಷಾ ನವರತ್ನರಾಂ ಹಾಗು ತಂದೆ ಪ್ರಸಿದ್ಧ ಸಾಹಿತಿಯಾದ ನವರತ್ನರಾಂ